Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಿನ್ನಲೆ ಸಂಗೀತದಲ್ಲಿ ಅಂಜದಿರು
Posted date: 7/January/2009

ಇತ್ತೀಚೆಗಷ್ಟೇ ಮಾತಿನಮನೆಯಿಂದ ಹೊರಬಂದ `ಅಂಜದಿರು` ಚಿತ್ರಕ್ಕೆ ಚಾಮರಾಜಪೇಟೆಯ ವಿಜಯ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಪ್ರೀಮಿಯರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಟ ಕೃಷ್ಣೇಗೌಡರ ಪುತ್ರ ಮುರುಳಿಧರ್ ನಿರ್ಮಿಸುತ್ತಿರುವ `ಅಂಜದಿರು` ಚಿತ್ರಕ್ಕೆ ಶ್ರೀರಂಗಪಟ್ಟಣ, ಪಾಂಡವಪುರ, ಚಿಕ್ಕಾಡೆ ಹಾಗೂ ಮೈಸೂರಿನ ಆಸುಪಾಸಿನಲ್ಲಿ ಚಿತ್ರೀಕರಣ ನಡೆದಿದೆ. ನಿರ್ಮಾಪಕರಾಗಿರುವ ಮುರುಳಿಧರ್ ಚಿತ್ರದಲ್ಲಿ ದ್ವಿತೀಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಂದೆ ಕೃಷ್ಣೇಗೌಡ ಕೂಡ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

    ಜನಾರ್ದನ್  ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ಸುಂದರ್.ಪಿ.ಬಾಬು ಸಂಗೀತ ಸಂಯೋಜಿಸಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ರಾಜೇಶ್, ಮಾಲೂರ್‌ಶ್ರೀನಿವಾಸ್ ನೃತ್ಯ, ಮಹಂತೇಶ್ ಸಹನಿರ್ದೇಶನ, ವೇಣು ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಶಾಂತ್, ಶುಭಾಪುಂಜ, ಸುಮನ್‌ರಂಗನಾಥ್, ಮುರಳಿಧರ್, ಆದಿಲೋಕೇಶ್, ರವಿಕಾಳೆ, ದ್ವಾರಕೀಶ್, ಕೃಷ್ಣೇಗೌಡ, ಶ್ರೀನಿವಾಸಮೂರ್ತಿ, ಅವಿನಾಶ್, ಮುಖ್ಯಮಂತ್ರಿಚಂದ್ರು, ಪದ್ಮಜಾರಾವ್ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಿನ್ನಲೆ ಸಂಗೀತದಲ್ಲಿ ಅಂಜದಿರು - Chitratara.com
Copyright 2009 chitratara.com Reproduction is forbidden unless authorized. All rights reserved.